Thursday, November 20, 2008

ಸಂತ ಶ್ರೇಷ್ಠ ರಾಜಾರಾಂ ಮಹಾರಾಜರಿಗೆ ನಮನಗಳು

ಹುಟ್ಟಿದಾಗ ತಾಯಿಗೆ ಹಾಲಿಗಾಗಿ ಬೇಡಿದೆವು, ಬೆಳೆಯುವಾಗ ವಸ್ತುಗಳಿಗಾಗಿ ತಂದೆಯ ಬೇಡಿದೆವು
ಕಲಿಯುವಾಗ ಗುರುಗಳನು ಬೇಡಿದೆವು, ಗಳಿಸುವಾಗ ಉದ್ಯೋಗ್ ದಾತಾರನಿಗೆ ಬೇಡಿದೆವು
ರೈತ ಭೂ ತಾಯಿಯ / ಮಳೆಯನು ಬೇಡುವವನು, ಮಂತ್ರಿ ಮತಗಳ ಬೇಡುವವನು
ಸ್ವಯಮ್ ಉದ್ಯೋಗಿ ಗ್ರಾಹಕರಿಗೆ ಬೇಡುವವನು , ನಟ ಪ್ರೇಕ್ಷಕರ ಬೇಡುವವನು

ನೋಡಿದ್ರೆ ನಾವೆಲ್ಲರೂ ಎಲ್ಲರೂ ಒಂದಿಲ್ಲ ಒಂದು ಹಂತದಲ್ಲಿ ಬೇಡಿ ಪಡೆದವರೇ ... ಅಲ್ವೇ ????


ಈ ಕೆಳಗಿನ ಕವನವು ರಾಜಾರಾಂ ಮಹಾರಾಜ್ ಅವರಿಂದ ಮರಾಠಿ ಅಭಂಗ ರೂಪದಲ್ಲಿ ರಚಿತವಾಗಿರುತ್ತದೆ
ರಾಜಾರಾಂ ಮಹಾರಾಜರು ಶ್ರೀ ಶಿವ್ ಚಿದಂಬರೇಶ್ವರ ಮಹಾಸ್ವಾಮಿಗಳ ಶ್ರೇಷ್ಠ ಭಕ್ತರು, ಇವರು ಲಕ್ಷಕ್ಕಿಂತ ಹೆಚ್ಚು ಅಭಂಗಗಳನ್ನು ರಚಿಸಿರುತ್ತಾರೆ ..
ಇಲ್ಲಿ ಅವರು ತಮ್ಮನ್ನು ದೇವರಲ್ಲಿ ಭಿಕ್ಷುಕ ಎಂದು ಹೇಳಿಕೊಳ್ಳುತ್ತಾರೆ ...

"ಅರ್ಥಪೂರ್ಣ ಅನುವಾದ "

"ನಿನ್ನ ದ್ವಾರದಿ ಭಿಕ್ಷೆಯ ಬೇಡುವವ ನಾನು
ಮೂರೂ ಲೋಕಕ್ಕೂ ಕೊಡುವಾತ ನೀನು

ಅದ ತಿಳಿದೇ ಬೆದುತ್ತಿರುವೇನು
ಪ್ರೇಮ ಭಕ್ತಿ ಭಿಕ್ಷೆಯ ನೀಡು, ಅವನಲ್ಲದೆ ಮತ್ತೇನು ಕೊಡದಿರು ನೀನು
ದಾಸನಾಗಿ ಜೋಳಿಗೆ ಚಾಚಿರುವೇನು, ತಡಮಾಡದೆ ಕೊಡು ನೀನು .
."

Wednesday, November 5, 2008

ಹುಟ್ಟು ಹಬ್ಬಕ್ಕೆ, ವ್ಯಥೆಗೆ ಮತ್ತು ಭಯಕ್ಕೆ ಏನು ಸಂಬಂಧ???

ಅಭಿನಂದಿಸುವದು ಚಲುವೆಗೆ ಜನ್ಮದಿನದಂದು,
ಏಕೋ ಸರಿ ಬರುವದಿಲ್ಲ, ಅಂದಿತು ಮನ ನನ್ನದಿಂದು.
ಅವಳಿಗೋ ವಯಸ್ಸಾಯಿತಲ್ಲ ಎಂಬ ವ್ಯಥೆ ಇಂದು,
ಚೆಲುವು ಎಲ್ಲಿ ಬರಿದಗುವುದೋ ಎಂಬ ಭಯ ನನ್ನಲಿ ಇಂದು.

Tuesday, November 4, 2008

ಮನಸ್ಸಿಗೆ ಸಾಟಿಯೇ ನೀ ಹಕ್ಕಿ ???


ಸುಂದರ ಈ ಮನಸು ,ಬಿಚಿಟ್ಟರೆ ಹೊಂಗನಸು.
ಹಾರಾಡುವ ಹಕ್ಕಿ ಈ ಮನಸ್ಸು ರೆಕ್ಕೆ ಇಲ್ಲದಿದ್ದರೂ ಎಷ್ಟು ಸೊಗಸು ??

ಕೂರುವುದು ಸೊಂಪಾದ ಕೊಂಬೆಯಮೇಲೆ ಕೆಲಹೊತ್ತು,
ಕೊಂಬೆ ಆಗಿರಬಹುದು ಕನಸು, ಇಲ್ಲ ಮತ್ತೊಂದು ಮನಸು .
ಹಕ್ಕಿಗೆ ಇರುವುದು ಪರಿಮಿತಿ ಇಂತಿಷ್ಟು,
ಮನಸ್ಸೇ ಅಪರಿಮಿತ , ವೇಗ ಸಾಟಿ ಇಲ್ಲದಷ್ಟು .

ಹಕ್ಕಿಗೆ ದೃಷ್ಟಿ ತಾ ಎತ್ತರ ಹಾರಿದಷ್ಟು,
ದೃಷ್ಟಿ ಕೋನಕ್ಕೆ ಮನದ ಕೊಡುಗೆ ಸಾಕಷ್ಟು .
ಹಕ್ಕಿಗೋ ಹಾರಲಾಗುವುದಿಲ್ಲ ಎಲ್ಲ ಹೊತ್ತು ,
ಸುಮ್ಮನೆ ಕೂರೋಲ್ಲ ಈ ಮನಸ್ಸು ಯಾವೊತ್ತು .

ಹಕ್ಕಿಗೆ ಇರಬಹುದು ಪಂಜರದ ಭಯ ಸಾಕಷ್ಟು ,ದೇವರೇ ಮಾತ್ರ ಬಂಧಿಸಬಲ್ಲನು ಈ ಮನಸ್ಸಿಗೆಷ್ಟು .??
ಗರಿಗಳಿಗಿಂತ ಹೆಚ್ಹು ಮನಸ್ಸಿನ ಬಣ್ಣಗಳ ಗಮ್ಮತ್ತು, ಅನುಭವಿಕರಗೇ ಗೊತ್ತು ಮನಸ್ಸಿನ ಮಹಿಮೆ ಎಷ್ಟು ..