Friday, December 19, 2008

ಕಟುಕಿ

ಚಂದ್ರ ಹುಣ್ಣಿಮೆಯಂದು ಪುರ್ಣವಾಗಲೇ ಇಲ್ಲ
ನಿನ್ನ ಮಾತಿನಲ್ಲಿ ತಣ್ಣಗೆ ಮಿಂದ ನನಗೆ
ನಿನ್ನ ಮೌನ ಉರಿ ಆಯಿತಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!



ನದಿ ಕೋಟಿ ಮೈಲಿ ಹರಿದರೂ ಸಾಗರ್ ಸೇರಲೆಯಿಲ್ಲ
ನಿನ್ನ್ ಕಂಗಳಲಿ ಕನಸ ಕಂಡ ನನಗೆ
ನಿನ್ನ ನೋಟ ಕೊಲೆಪಾತಕವಾಯಿತಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!



ಸೂರ್ಯ ಉದಯಿಸಿ ಅಸ್ತಂಗತವಾಗಲೆಯಿಲ್ಲ
ನನ್ನುಸಿರಲಿ ಅಡಗಿದ ನಿನ್ನ ಎದೆಬಡಿತ
ನನ್ ಉಸಿರ ಗಟ್ಟಿಸಿತಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!


ಮಳೆ ಸುರಿಯಿತಾದರೂ ಭುವಿ ತಣಿಯಲೇ ಇಲ್ಲ
ನಿನ್ ಚೆಲುವಲಿ ಚಂದಿರ ಕಂಡವಗೆ
ಉಡುಗೊರೆಯಲಿ ಹಿಡಿ ಕೆಂಡವ ನೀಡಿದೆಯಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!

Sunday, December 7, 2008

ತಿಳಿಯ ಬೇಕಿದೆ


ಯಾರ ಮನ ಮನದಾ ಮುಡಿಪೋ?
ಯಾವ ಕಂಗಳ ಕನಸೋ ನನ್ ವಯಸು?
ಯಾವ ಕಿವಿಗಳ ಇಂಪು ಮಾತು?
ಯಾರ ಹೃದಯದ ಬಡಿತವೋ ನನ್ನುಸಿರು? ತಿಳಿಯ ಬೇಕಿದೆ

ಕಣ್ಣೋಟ ಯಾರಿಗೆ ಮಿಂಚೋ?
ನನ್ ನಗೆಯು ಯಾರಾ ನಲಿವೋ?
ನನ್ನ ತುಂಟಾಟ ಯಾರ ನಗೆಯೋ?
ಕಣ್ಣ್ ಸನ್ನೆ ಯಾರಿಗೆ ಒಲವೋ? ತಿಳಿಯ ಬೇಕಿದೆ

  ನನ್ನ ಓಟಕ್ಕೆ ಕನಸಲಿ ನಿಳುಕುವಳ್ಯಾರೋ ?
ನನ್ನ ವ್ಯಥೆಗೆ ಯಾರ್ ಕಣ್ ಹನಿಯೋ?
ಜೀವಕೆ ಸಂಜೀವಿನಿ ಯಾರೋ?
ಯಾರ್ ಶೋಕಗ್ನಿ ನನ್ನ ಚಿತೆಗೋ? ತಿಳಿಯ ಬೇಕಿದೆ


Thursday, November 20, 2008

ಸಂತ ಶ್ರೇಷ್ಠ ರಾಜಾರಾಂ ಮಹಾರಾಜರಿಗೆ ನಮನಗಳು

ಹುಟ್ಟಿದಾಗ ತಾಯಿಗೆ ಹಾಲಿಗಾಗಿ ಬೇಡಿದೆವು, ಬೆಳೆಯುವಾಗ ವಸ್ತುಗಳಿಗಾಗಿ ತಂದೆಯ ಬೇಡಿದೆವು
ಕಲಿಯುವಾಗ ಗುರುಗಳನು ಬೇಡಿದೆವು, ಗಳಿಸುವಾಗ ಉದ್ಯೋಗ್ ದಾತಾರನಿಗೆ ಬೇಡಿದೆವು
ರೈತ ಭೂ ತಾಯಿಯ / ಮಳೆಯನು ಬೇಡುವವನು, ಮಂತ್ರಿ ಮತಗಳ ಬೇಡುವವನು
ಸ್ವಯಮ್ ಉದ್ಯೋಗಿ ಗ್ರಾಹಕರಿಗೆ ಬೇಡುವವನು , ನಟ ಪ್ರೇಕ್ಷಕರ ಬೇಡುವವನು

ನೋಡಿದ್ರೆ ನಾವೆಲ್ಲರೂ ಎಲ್ಲರೂ ಒಂದಿಲ್ಲ ಒಂದು ಹಂತದಲ್ಲಿ ಬೇಡಿ ಪಡೆದವರೇ ... ಅಲ್ವೇ ????


ಈ ಕೆಳಗಿನ ಕವನವು ರಾಜಾರಾಂ ಮಹಾರಾಜ್ ಅವರಿಂದ ಮರಾಠಿ ಅಭಂಗ ರೂಪದಲ್ಲಿ ರಚಿತವಾಗಿರುತ್ತದೆ
ರಾಜಾರಾಂ ಮಹಾರಾಜರು ಶ್ರೀ ಶಿವ್ ಚಿದಂಬರೇಶ್ವರ ಮಹಾಸ್ವಾಮಿಗಳ ಶ್ರೇಷ್ಠ ಭಕ್ತರು, ಇವರು ಲಕ್ಷಕ್ಕಿಂತ ಹೆಚ್ಚು ಅಭಂಗಗಳನ್ನು ರಚಿಸಿರುತ್ತಾರೆ ..
ಇಲ್ಲಿ ಅವರು ತಮ್ಮನ್ನು ದೇವರಲ್ಲಿ ಭಿಕ್ಷುಕ ಎಂದು ಹೇಳಿಕೊಳ್ಳುತ್ತಾರೆ ...

"ಅರ್ಥಪೂರ್ಣ ಅನುವಾದ "

"ನಿನ್ನ ದ್ವಾರದಿ ಭಿಕ್ಷೆಯ ಬೇಡುವವ ನಾನು
ಮೂರೂ ಲೋಕಕ್ಕೂ ಕೊಡುವಾತ ನೀನು

ಅದ ತಿಳಿದೇ ಬೆದುತ್ತಿರುವೇನು
ಪ್ರೇಮ ಭಕ್ತಿ ಭಿಕ್ಷೆಯ ನೀಡು, ಅವನಲ್ಲದೆ ಮತ್ತೇನು ಕೊಡದಿರು ನೀನು
ದಾಸನಾಗಿ ಜೋಳಿಗೆ ಚಾಚಿರುವೇನು, ತಡಮಾಡದೆ ಕೊಡು ನೀನು .
."

Wednesday, November 5, 2008

ಹುಟ್ಟು ಹಬ್ಬಕ್ಕೆ, ವ್ಯಥೆಗೆ ಮತ್ತು ಭಯಕ್ಕೆ ಏನು ಸಂಬಂಧ???

ಅಭಿನಂದಿಸುವದು ಚಲುವೆಗೆ ಜನ್ಮದಿನದಂದು,
ಏಕೋ ಸರಿ ಬರುವದಿಲ್ಲ, ಅಂದಿತು ಮನ ನನ್ನದಿಂದು.
ಅವಳಿಗೋ ವಯಸ್ಸಾಯಿತಲ್ಲ ಎಂಬ ವ್ಯಥೆ ಇಂದು,
ಚೆಲುವು ಎಲ್ಲಿ ಬರಿದಗುವುದೋ ಎಂಬ ಭಯ ನನ್ನಲಿ ಇಂದು.

Tuesday, November 4, 2008

ಮನಸ್ಸಿಗೆ ಸಾಟಿಯೇ ನೀ ಹಕ್ಕಿ ???


ಸುಂದರ ಈ ಮನಸು ,ಬಿಚಿಟ್ಟರೆ ಹೊಂಗನಸು.
ಹಾರಾಡುವ ಹಕ್ಕಿ ಈ ಮನಸ್ಸು ರೆಕ್ಕೆ ಇಲ್ಲದಿದ್ದರೂ ಎಷ್ಟು ಸೊಗಸು ??

ಕೂರುವುದು ಸೊಂಪಾದ ಕೊಂಬೆಯಮೇಲೆ ಕೆಲಹೊತ್ತು,
ಕೊಂಬೆ ಆಗಿರಬಹುದು ಕನಸು, ಇಲ್ಲ ಮತ್ತೊಂದು ಮನಸು .
ಹಕ್ಕಿಗೆ ಇರುವುದು ಪರಿಮಿತಿ ಇಂತಿಷ್ಟು,
ಮನಸ್ಸೇ ಅಪರಿಮಿತ , ವೇಗ ಸಾಟಿ ಇಲ್ಲದಷ್ಟು .

ಹಕ್ಕಿಗೆ ದೃಷ್ಟಿ ತಾ ಎತ್ತರ ಹಾರಿದಷ್ಟು,
ದೃಷ್ಟಿ ಕೋನಕ್ಕೆ ಮನದ ಕೊಡುಗೆ ಸಾಕಷ್ಟು .
ಹಕ್ಕಿಗೋ ಹಾರಲಾಗುವುದಿಲ್ಲ ಎಲ್ಲ ಹೊತ್ತು ,
ಸುಮ್ಮನೆ ಕೂರೋಲ್ಲ ಈ ಮನಸ್ಸು ಯಾವೊತ್ತು .

ಹಕ್ಕಿಗೆ ಇರಬಹುದು ಪಂಜರದ ಭಯ ಸಾಕಷ್ಟು ,ದೇವರೇ ಮಾತ್ರ ಬಂಧಿಸಬಲ್ಲನು ಈ ಮನಸ್ಸಿಗೆಷ್ಟು .??
ಗರಿಗಳಿಗಿಂತ ಹೆಚ್ಹು ಮನಸ್ಸಿನ ಬಣ್ಣಗಳ ಗಮ್ಮತ್ತು, ಅನುಭವಿಕರಗೇ ಗೊತ್ತು ಮನಸ್ಸಿನ ಮಹಿಮೆ ಎಷ್ಟು ..

Friday, October 31, 2008

ನಾನು ಹುಡುಕುತ್ತಿರುವವಳ ಯೋಚನೆಯಲ್ಲಿ

"ಅವಳ್ಯಾರೋ ನಾ ಅರಿಯೆ ಅವಳಲ್ಲೇ ನಾ ಇರುವೆ"
"ಎಂದು ಎದುರು ಬರುವಳೋ ??
ಕಾದಿರುವೆ .."

"ಬರುವೆಯಾ ಕನಸಲಿ ಇಂದು ಕೇಳುತಿದೆ ಮನ, ಕೈ ಚಾಚಿಕೊಂಡು"
"ಹುಚ್ಚು ಕಂಗಳ ಹುಡುಕಾಟ, ಮನಸಿನಲಿ ನಿಲ್ಲದ ನಲಿದಾಟ"

"ಕಳೆಯಲಾರೆ ಕ್ಷಣಗಳನಿನ್ನು ಹೃದಯ ಬಡಿತ ಬೇಡಿದೆ ನಿನ್ನನ್ನು"
"ಕೂರಲಾರೆ ಸುಮ್ಮನೆ ಇನ್ನು, ಓಡುವೆ ಕನಸಿನಲಿ ಹಿಡಿಯಲು ನಿನ್ನನ್ನು"

"ಬರಿ ನಿನ್ನ ಮೊಗದ ದರ್ಶನ ಸಾಕು, ನೂರು ಜನುಮ ಸಾರ್ಥಕವಿನ್ನು"
"ನಿನ್ನ ಮಾತು ಕೇಳಲು ನಾನು, ಕಾದಿರುವೆ ಕೋಟಿ ಕ್ಷಣಗಳ ಎನ್ನು.."

Thursday, October 30, 2008

ನಂಬಿಕೆ

ಚುಟುಕು ನನ್ನ ಮೊದಲನೆ ಪ್ರಯೋಗವಾಗಿತ್ತು ....
ಇದನ್ನ ನಾನು ನನ್ನವಳಿಗಾಗಿ ಬರೆದಿರುತ್ತೇನೆ......................

"ನಂಬಿಕೆ"

ನಂಬು ನನ್ನ , ನಾ ಹೇಳುವುದು ಸತ್ಯ
ಈ ಜಗವು ಇರಬಹುದು ಮಿಥ್ಯ!
ನನ್ನ ಪ್ರೀತಿ ನಿನಗಾಗಿ ನಿತ್ಯ
ಆ ಸೂರ್ಯ ಚಂದ್ರರೇ ಸೇರಿದರೂ ನೇಪಥ್ಯ..

ಸ್ನೇಹಿತರ ದಿನ

ಗೆಳೆಯರೇ ಮತ್ತು ನನ್ನ ಗೆಳತಿಯರೆ ಈ ಚುಟುಕನ್ನ ನಾನು ಸ್ನೇಹಿತರ ದಿನದಂದು ಬರೆದಿದ್ದೆ... "ನನ್ನ ಸ್ನೇಹಿತೆಗಾಗಿ"


"ಸ್ನೇಹಿತರ ದಿನ"

ಜೀವನದ ಕಡಲಲ್ಲಿ ಈಜುವುದು ಕಷ್ಟ,
ಜೊತೆಯಲ್ಲಿ ನೀನಿದ್ದರೆ ವ್ಯಥೆಯೆಲ್ಲ ನಷ್ಟ.
ಸ್ನೇಹದ ದೋಣಿಗೆ ನೀನಾದರೆ ನಾವಿಕ,
ನಾ ಆಗ ಬಯಸುವೆ ಅದರ ಹುಟ್ಟ.
ಗೆಳತಿ ಈ ದಿನ ನಿನಗೆ, ನನ್ನ ಹೃದಯದ ಪಟ್ಟ ...